ಯುಗಾದಿ ಹೊಂಬೆಳಕು
- ಯು ಬಸವರಾಜ ಕೆ.ಹಂಚಿನಾಳ
ಯುಗ ಯುಗಗಳೆ ಕಳೆಯುತಿವೆ,
ಹೊಂಬೆಳಕಿನ ಯುಗಾದಿ ಮೆರೆಯುತಿದೆ. ||ಪ||
ನವ ಚಿಗುರು ಹೊತ್ತು ನಿಂತು,
ಹಚ್ಚ ಹಸಿರು ಸುತ್ತ ತಂತು,
ಮನದಲಿ ಹೊಸತನ ಚಿಮ್ಮುಸುತಾ,
ಸಡಗರದ ಸರಗ ಚೆಲ್ಲಲು,
ಮನುಕುಲದತ್ತ ಬರುತಿದೆ ಸಂಭ್ರಮದ ಯುಗಾದಿ. ||೧||
ಬರಿದಾದ ಬೋಳು ಮರಕೆ ಜೀವ ಬಂತು,
ಪುಟಾಣಿಗಳ ಸಿಹಿ ತಿನ್ನೋ ಆಸೆ ಚಿಗುರಿತು.
ಪಡುವಣದ ಅಂಚಿನಲಿ ಕಾಮನಬಿಲ್ಲಿನ ಆಟ,
ಭೂಮಂಡಲಕೆ ವರುಣನ ಆರ್ಭಟ,
ಇದುವೆ ರೈತರಿಗೆ ಯುಗಾದಿ ಸಂಭ್ರಮದ ಕೂಟ. ||೨||
ಬೇವು ಮಿತವಾಗಲಿ, ಬೆಲ್ಲ ಹಿತವಾಗಲಿ,
ಬದುಕು ಬೆಳಗಲಿ, ಬೇವು ಬೆಲ್ಲದ ಮಿಶ್ರಣದಂತೆ.
ಜ್ಞಾನದ ದೀವಿಗೆ ಮೌಢ್ಯತೆ ಕಳೆದು,
ಮನ-ಮನೆಗಳಲ್ಲಿ ಶಾಂತಿಯ ಸಂತೋಷ ಚಿಮ್ಮಲಿ,
ಹೊಸ ವರ್ಷದ ಚಾಂದ್ರಮಾನ ಯುಗಾದಿ. ||೩||
ಬರವು ಮರೆಯಾಗಲಿ, ಬದುಕು ಹಸನಾಗಲಿ.
ಬಿಸಿಲು ಸರೆಯಲಿ ಮಳೆಯು ಸುರಿಯಲಿ.
ಭ್ರಷ್ಟತೆ ಕಳೆಯಲಿ, ದಕ್ಷತೆ ಉಳಿಯಲಿ.
ಉಣ್ಣಿಸುವವ ಉತ್ತಮವಾಗಲಿ,ಕಾಯುವವ ಶಕ್ತನಾಗಲಿ.
ಇವುಗಳೆಲ್ಲದರೊಂದಿಗೆ ಬರುವ ಯುಗಾದಿ ಸಂಭ್ರಮವಾಗಿರಲಿ. ||೪||